Friday, 15 December 2023

ನಾಯಿ ಕಚ್ಚಿದನ್ನು ಪ್ರಶ್ನಿಸಿದಾತನ ಮೇಲೆ ನಾಯಿ ಮಾಲಕನಿಂದ ಚೂರಿಯಿರಿತ

 


ಪಾದಾಚಾರಿಯೊಬ್ಬರಿಗೆ ದಾರಿ ಮಧ್ಯೆ ನಾಯಿಯೊಂದು ಕಚ್ಚಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ನಾಯಿಯ ಯಜಮಾನ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆಯೊಂದು ಡಿ.13 ರಂದು ನಡೆದಿದೆ. ಈ ಘಟನೆ ಬಂಟ್ವಾಳ, ಕಾವಳ ಮುಡೂರು ಗ್ರಾಮದಲ್ಲಿ ನಡೆದಿದೆ.ಸಂತೋಷ್‌ ದೇವಾಡಿಗ ಹಲ್ಲೆಗೊಳಗಾದ ವ್ಯಕ್ತಿ. ಶ್ರೀಧರ ಶೆಟ್ಟಿ ಹಲ್ಲೆ ಆರೋಪಿ.

ಡಿ.13 ರಂದು ಕಾವಳಕಟ್ಟೆಯಿಂದ ನೆಲ್ಲಿಗುಡ್ಡೆ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಸಂತೋಷ್‌ ದೇವಾಡಿಗ ಅವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಬಾರದಬೈಲು ಎಂಬಲ್ಲಿಗೆ ತಲುಪಿದಾಗ ಪಕ್ಕದ ಮನೆಯ ನಾಯಿಯೊಂದು ಬಲಗಾಲಿಗೆ ಕಚ್ಚಿದೆ. ಈ ಸಮಯದಲ್ಲಿ ಆರೋಪಿ ಶ್ರೀಧರ ಶೆಟ್ಟಿಯವರು ಮನೆಯಂಗಳದಲ್ಲಿ ನಿಂತಿದ್ದು, ಯಾಕೆ ಕಚ್ಚುವ ನಾಯಿಯನ್ನು ರಸ್ತೆಗೆ ಬಿಡುತ್ತೀರಿ ಎಂದು ಪ್ರಶ್ನೆ ಮಾಡಿದಾಗ, ಶ್ರೀಧರ್‌ ಅವರು ಅವಾಚ್ಯ ಶಬ್ದಗಳಿಂದ ಬೈದು ಕಡಿದು ಗಾಯಗೊಳಿಸಿದ್ದಾಗಿ ಪೂಂಜಾಲಕಟ್ಟೆ ಠಾಣೆಗೆ ನೀಡಿದ ದೂರಿನಲ್ಲಿ ಸಂತೋಷ್‌ ಅವರು ಆರೋಪ ಮಾಡಿದ್ದಾರೆ.


No comments:

Post a Comment

ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌

 ಹಾಸನ: ಬೆಂಗಳೂರಿನಿಂದ ಮಂಗಳೂರಿಗೆ  ತೆರಳುತ್ತಿದ್ದ ಖಾಸಗಿ ಬಸ್ ತಡೆದು ಲಾಂಗ್‌ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದ ಪುಡಿರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘ...